22 May 2009

New Blog for Photography

Many people like the colors & beauty of the nature. And I am not an exception. Obviously I am interested in capturing them in my camera. I make some time free for photography & upload some photos on http://colorshots.blogspot.com/

Please visit in your free time & share your opinions/suggestions.

(Click on titles under ‘Blog Archive’ on right side to see individual posts. Click on photos to see a full size photo in detail)

Don’t forget to leave your comments.

06 May 2009

ಗೀತೆಯ ಸಾರ

ದ್ವಾಪರಾಯುಗದಲ್ಲಿ ಕುರುಕ್ಷೇತ್ರದಲ್ಲಿ ಅರ್ಜುನನು ಯುದ್ಧ ಬೇಡವೆಂದು ಶಸ್ತ್ರ ತ್ಯಾಗ ಮಾಡಿ ಕುಳಿತಾಗ ಶ್ರೀಕೃಷ್ಣನು ಅವನಿಗೆ ಭಗವದ್ಗೀತೆ ಉಪದೇಶ ಮಾಡುತ್ತಾನೆ. ಸಹಸ್ರಾರು ವರ್ಷಗಳ ಹಿಂದೆ ಮಾಡಿದ ಉಪದೇಶದ ಸಾರ ಇಂದಿಗೂ ಪ್ರಸ್ತುತ. ಏನನ್ನಾದರೂ ಕಳೆದು ಕೊಂಡಾಗ, ಸೋತು ಕುಳಿತಾಗ, ಚಿಂತೆ ತಲೆಯನ್ನು ಸುಡುತ್ತಿರುವಾಗ, ಜೀವನದಲ್ಲಿ ಜಿಗುಪ್ಸೆ ಬಂದಾಗ ಇಂತಹ ಉಪದೇಶದ ನಾಲ್ಕು ಮಾತುಗಳನ್ನು ಕೇಳಿದಾಗ ಮನಸ್ಸಿಗೆ ಹಿತವಾಗುತ್ತದೆ, ಉತ್ಸಾಹವನ್ನು ತುಂಬುತ್ತದೆ. ಜೀವನದಲ್ಲಿ ಮುನ್ನುಗ್ಗಲು, ಹೊಸದನ್ನು ಕಲಿಯಲು-ಮಾಡಲು ಹೊಸ ಹುರುಪನ್ನು ತರುತ್ತದೆ. ಈಗಿನ ಯಾವುದೇ ಆಂಗ್ಲ ಪುಸ್ತಕಗಳು ಹೇಳುವುದಕ್ಕಿಂತ ಒಳ್ಳೆಯ ಹಾಗೂ ಹೆಚ್ಚಿನ ವಿಚಾರಗಳು ಗೀತೆಯಲ್ಲೇ ಇವೆ.

೩-೪ ವರ್ಷಗಳ ಹಿಂದೆ ಗೀತೆಯ ಸಾರದ ಬಗ್ಗೆ ಒಂದು ಮಿಂಚೆ(email) ಬಂದಿತ್ತು. ಅದರ ಒಂದು ಭಾಗ ಇಲ್ಲಿದೆ:

ಇದರಲ್ಲಿರುವ ಒಂದೊಂದು ವಾಕ್ಯವೂ ಅರ್ಥಪೂರ್ಣ.

ಗೀತೆಯ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ತುಂಬಾ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯ. ತುಂಬಾ ಜನ ಇದರ ತಾತ್ಪರ್ಯ-ವಿವರಣೆ ಸಹಿತ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಕನ್ನಡದಲ್ಲಿ ನನ್ನ ಗಮನಕ್ಕೆ ಬಂದ ಪುಸ್ತಕಗಳು:
೧. ಗೀತಾ ಪ್ರೆಸ್ ನವರು ತುಂಬಾ ಗಾತ್ರಗಳಲ್ಲಿ ಪ್ರಕಟಿಸಿದ್ದಾರೆ. ಕೇವಲ ಶ್ಲೋಕ-ಅರ್ಥವಿರುವ ಪಾಕೆಟ್ ಸೈಜ್ ನಿಂದ ಶ್ಲೋಕ-ಅನ್ವಯಾರ್ಥ-ಅನುವಾದ-ತಾತ್ಪರ್ಯವಿರುವ ದೊಡ್ಡ ಪುಸ್ತಕವೂ ಇದೆ. (ವಿವರಣೆ ಜಯದಯಾಲ ಗೋಯಂದಕಾ). ಎಲ್ಲಾ ಪುಸ್ತಕಗಳಿಗಿಂತಲೂ ಇವು ಅಗ್ಗ.
೨. ಇಸ್ಕಾನ್ ನವರೂ ಅರ್ಥದೊಂದಿಗೆ ಪುಸ್ತಕ ಪ್ರಕಟಿಸಿದ್ದಾರೆ.
೩. ಮಾನ್ಯ ಡಿ. ವಿ. ಗುಂಡಪ್ಪನವರ ಪುಸ್ತಕವೂ ಇದೆ.
೪. ಚಿನ್ಮಯ ಮಿಷನ್ ನವರೂ ಅರ್ಥ ವಿವರಿಸಿ ಪುಸ್ತಕ ಬರೆದಿದ್ದಾರೆ.

ಗೀತೆಯ ಗಾಯನ ಮತ್ತು ಅರ್ಥ ವಿವರಣೆಯ ಒತ್ತಟ್ಟೆ(CD) ಗಳೂ ಲಭ್ಯ. ಅದರಲ್ಲಿ ಮುಖ್ಯವಾದದ್ದು ವಿದ್ಯಾಭೂಷಣರ ಗಾಯನದ ಒತ್ತಟ್ಟೆ. ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಅರ್ಥ ವಿವರಣೆ ಇರುವ ಬೇರೆ ಬೇರೆ ಒತ್ತಟ್ಟೆಗಳು ಸಿಗುತ್ತವೆ.

ಸಮಯ ಸಿಕ್ಕರೆ ಓದಿ, ಇಲ್ಲಾ ಕೇಳಿ. ಕೆಲಸದ ಝಂಝಾಟಗಳ ನಡುವೆ ಸ್ವಲ್ಪ ಜ್ಞಾನ ಸಂಪಾದನೆಯೂ ಆಗುತ್ತೆ, ಮನಸ್ಸಿಗೆ ನೆಮ್ಮದಿಯೂ ಸಿಗುತ್ತೆ.